Income Tax: ತೆರಿಗೆ ಇಲಾಖೆಯಿಂದ ಮಧ್ಯಮ ವರ್ಗದ ಜನರಿಗೆ ಗುಡ್ ನ್ಯೂಸ್! ಆದಾಯ ತೆರಿಗೆ ಕಡಿತ ಸಾಧ್ಯತೆ;

Income Tax: ತೆರಿಗೆ ಇಲಾಖೆಯಿಂದ ಮಧ್ಯಮ ವರ್ಗದ ಜನರಿಗೆ ಗುಡ್ ನ್ಯೂಸ್! ಆದಾಯ ತೆರಿಗೆ ಕಡಿತ ಸಾಧ್ಯತೆ;

ಮಧ್ಯಮ ವರ್ಗದ ಜನರಿಗೆ ಪರಿಹಾರ ಒದಗಿಸುವ ಸಲುವಾಗಿ ಮತ್ತು ಆರ್ಥಿಕತೆಯ ನಿಧಾನಗತಿ ತಡಿಗಾಗಿ ಬಳಕೆಗಳನ್ನು ಹೆಚ್ಚಿಸಲು ವರ್ಷಕ್ಕೆ ರೂ.15 ಲಕ್ಷವರೆಗಿನ ವ್ಯಕ್ತಿಗಳ ಆದಾಯ ತೆರಿಗೆಯನ್ನು ಕಡಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣನೆ ಮಾಡುತ್ತಿದೆ.

ಕೇಂದ್ರ ಸರ್ಕಾರವು ತೆರಿಗೆ ಇಲಾಖೆಯ ಮುಖಾಂತರ ಮಧ್ಯಮ ವರ್ಗದ ಜನರಿಗೆ ಬಹುದೊಡ್ಡ ರಿಲೀಫ್ ನೀಡಲು ಮುಂದಾಗಿದ್ದು, ರೂ.15 ಲಕ್ಷವರೆಗಿನ ಅದೇ ತೆರಿಗೆ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮುಂಬರುವ ಫೆಬ್ರವರಿ ತಿಂಗಳಿನಲ್ಲಿ, ಬಜೆಟ್(Budget) ನಲ್ಲಿ ಮಧ್ಯಮ ವರ್ಗದ ಜನರಿಗೆ ಪರಿಹಾರ ಒದಗಿಸಲು ಮತ್ತು ಆರ್ಥಿಕತೆಯ ನಿಧಾನಗತಿಯನ್ನು ಕಡಿಮೆ ಮಾಡಲು, ಬಳಕೆಯ ಪ್ರಮಾಣವನ್ನು ಹೆಚ್ಚಿಸಲ ವರ್ಷಕ್ಕೆ ರೂ.15 ಲಕ್ಷವರೆಗಿನ ಆದಾಯ ತೆರಿಗೆಯನ್ನು(Tax) ಕಡಿತಗೊಳಿಸುವ ಬಗ್ಗೆ ಸರ್ಕಾರವು ಗಂಭೀರ ನಿರ್ಣಯ ತೆಗೆದುಕೊಂಡಿದೆ ಎನ್ನಲಾಗಿದೆ.

ಈ ವಿಚಾರದ ಬಗ್ಗೆ, ರಾಷ್ಟ್ರೀಯ ಸುದ್ದಿ ಸಂಸ್ಥೆಯು ವರದಿ ಮಾಡಿದ್ದು, ಸರ್ಕಾರಿ ಮೂಲಗಳು ತಿಳಿಸಿರುವ ಹಾಗೆ ಕೇಂದ್ರ ಸರ್ಕಾರವು ರೂ. 15 ಲಕ್ಷವರೆಗಿನ ಆದಾಯ ತೆರಿಗೆ ಕಡಿತ(Tax Deduction) ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.

ಮುಖ್ಯವಾಗಿ ಮನೆ ಬಾಡಿಗೆಗಳಂತಹ ವಿನಾಯಿತಿಗಳನ್ನು ತೆಗೆದುಹಾಕುವುದರ ಬಗ್ಗೆ 2000 ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಂಡರೆ, ಈ ಕ್ರಮದಿಂದ ಮಿಲಿಯನ್ ಗಿಂತ ಹೆಚ್ಚಿನ ತೆರಿಗೆದಾರರಿಗೆ, ವಿಶೇಷವಾಗಿ ಅಂದರೆ ಹೆಚ್ಚಿನ ಜೀವನ ವೆಚ್ಚದಿಂದ ಹೊರೆಯಾಗಿರುವ ನಗರವಾಸಿಗಳಿಗೆ ಪ್ರಯೋಜನವನ್ನು ನೀಡುತ್ತದೆ, 2020ರ ತೆರಿಗೆ ಪದ್ಧತಿಯಲ್ಲಿ ರೂ.3 ಲಕ್ಷಗಳಿಂದ ರೂ.15 ಲಕ್ಷಗಳವರೆಗಿನ ವಾರ್ಷಿಕ ಆದಾಯಕ್ಕೆ 5% ರಿಂದ 20% ರ ವರೆಗೆ ತೆರಿಗೆ ವಿಧಿಸಿತ್ತು, ಈ ಪ್ರಮಾಣವು ಈಗ ಗರಿಷ್ಠವಾಗಿ 30% ರಷ್ಟಿತ್ತು.

ಕೇಂದ್ರ ಸರ್ಕಾರವು ಇದೀಗ ಹೊಸದಾಗಿ ಮುಂದಿಟ್ಟಿರುವ ಪ್ರಸ್ತಾಪದಲ್ಲಿ ಭಾರತೀಯ ತೆರಿಗೆದಾರನು ಎರಡು ತೆರಿಗೆ ವ್ಯವಸ್ಥೆಗಳ ನಡುವೆ ಆಯ್ಕೆ ಮಾಡಬಹುದು, ಅದೇನೆಂದರೆ ವಸತಿ ಬಾಡಿಗೆ ಮತ್ತು ಭೂಮಿಯ ಮೇಲಿನ ವಿನಾಯಿತಿಯನ್ನು ಅನುಮತಿಸುವ ಒಂದು ತೆರಿಗೆ ಪದ್ಧತಿಯಾಗಿದೆ, ಮತ್ತೊಂದೇನೆಂದರೆ 2020ರಲ್ಲಿ ಪರಿಚಯಿಸಿದ ತೆರಿಗೆ ಪದ್ಧತಿ, ಇದು ಸ್ವಲ್ಪ ಕಡಿಮೆಯ ತೆರಿಗೆ ದರಗಳನ್ನು ನೀಡುತ್ತದೆಯಾದರೂ ಮುಖ್ಯವಾದ ವಿನಾಯಿತಿಗಳನ್ನು ಅನುಮತಿ ಸುವುದಿಲ್ಲ ಎಂದು ಹೇಳಿದೆ.

ವರದಿಯಲ್ಲಿರುವ ಹಾಗೆ, ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರವಿಲ್ಲದ ಕಾರಣ ಹೆಸರು ಹೇಳಲು ಇಚ್ಚಿಸದ ಅಧಿಕಾರಿ ಒಬ್ಬರು ಇದರ ಬಗ್ಗೆ ಮಾಹಿತಿ ನೀಡಿದ್ದು, ಯಾವುದೇ ಕಡತದ ಬಗ್ಗೆ ಇದುವರೆಗೂ ನಿರ್ಧಾರ ಮಾಡಿಲ್ಲ, ಮುಂಬರುವ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಬಡ್ಜೆಟ್ ನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ, ಇದೆ ವೇಳೆಯಲ್ಲಿ ತೆರಿಗೆ ಕಡಿತದಿಂದ ಆಗುವ ಆದಾಯ ನಷ್ಟವನ್ನು ಹಂಚಿಕೊಳ್ಳಲು ನೀರಾಕರಿಸಿದ ಅಧಿಕಾರಿಯು, ತೆರಿಗೆ ದರಗಳನ್ನು ಕಡಿಮೆ ಮಾಡುವುದರಿಂದ ಹೆಚ್ಚಿನ ಜನರು ಜಟಿಲವಾದ ಹೊಸ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ.

ಕೇಂದ್ರ ಸರ್ಕಾರವು ಆದಾಯ ತೆರಿಗೆಯ ಹೆಚ್ಚಿನ ಭಾಗವನ್ನು ಕನಿಷ್ಠ ರೂ. 10 ಲಕ್ಷ ಗಳಿಸುವ ವ್ಯಕ್ತಿ ಅಥವಾ ತೆರಿಗೆ ಪಾವತಿದಾರರಿಂದ ಪಡೆಯುತ್ತದೆ, ಅದರಂತೆಯೇ ಸರಕಾರದ ಈ ನಿರ್ಧಾರವು ಮಧ್ಯಮ ವರ್ಗದ ಕೈಯಲ್ಲಿನ ಹೆಚ್ಚಿನ ಹಣದ ಹರಿವನ್ನು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಗೆ ಪಾತ್ರವಾಗಲಿದೆ.

ಜುಲೈ ಮತ್ತು ಸಪ್ಟೆಂಬರ್ ತಿಂಗಳ ನಡುವಿನ ಏಳು ತ್ರೈಮಾಸಿಕಗಳಲ್ಲಿ ನಿಧಾನ ಗತಿಯಲ್ಲಿ ಬೆಳೆದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಈ ಆರ್ಥಿಕತೆಯು ಸಹಾಯಮಾಡುತ್ತದೆ, ಹಣದುಬ್ಬರದ ಹೆಚ್ಚಿನ ಪಾಲು ಆಹಾರ, ಸೋಪು ಮತ್ತು ಶಾಂಪುಗಳಿಂದ ಹಿಡಿದು ಕಾರು ಮತ್ತು ದ್ವಿಚಕ್ರ ವಾಹನಗಳ ವರೆಗೆ ವಿಶೇಷವಾಗಿ ಅಂದರೆ ನಗರ ಪ್ರದೇಶಗಳಲ್ಲಿ ಸರಕುಗಳ ಮೇಲಿರುವ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯು ಅಭಿಪ್ರಾಯ ಪಟ್ಟಿದೆ.

ಸರ್ಕಾರ ಈಗಾಗಲೇ ಹೆಚ್ಚಿನ ತೆರಿಗೆಗಳ ವಿಚಾರವಾಗಿ ಮಧ್ಯಮ ವರ್ಗದಿಂದ ಹಿಡಿದು ರಾಜಕೀಯ ವಿಕೋಪಗಳನ್ನು ಎದುರಿಸುತ್ತಿದ್ದು, ಪ್ರಮುಖವಾಗಿ ಹೇಳುವುದಾದರೆ ವೇತನದಲ್ಲಿನ ಬೆಳವಣಿಗೆಯ ಪ್ರಮಾಣವು ಹಣದುಬ್ಬರದ ವೇಗದ ಪ್ರಮಾಣದಷ್ಟಿಲ್ಲ. ಇದೂ ಕೂಡ ತೆರಿಗೆದಾರರ(Tax Payers) ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

ಈಗಿನ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ರೂ.3 ಲಕ್ಷದಿಂದ 15 ಲಕ್ಷ ಆದಾಯ ಹೊಂದಿರುವವರು, ಪ್ರತಿಶತ 5-20% ತೆರಿಗೆ ವಿಧಿಸಲಾಗುತ್ತದೆ, ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು 30% ರಷ್ಟು ಹಣವನ್ನು ತೆರಿಗೆಯಾಗಿ ಕಟ್ಟಬೇಕಾಗುತ್ತದೆ.

 

 

Leave a Comment