Arecanut: ಕೇಂದ್ರದಿಂದ ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ! ಸಂಪೂರ್ಣ ಮಾಹಿತಿ ಇಲ್ಲಿದೆ
ಅಡಿಕೆಯು ಹವ್ಯಕ ಸಮಾಜದ ಮೂಲ ಕೃಷಿಯಾಗಿದೆ, ಅಡಿಕೆಯ ಬಗ್ಗೆ ಯಾವುದೇ ವಿವಿಧ ಅಪಾಯಗಳು ವ್ಯಕ್ತವಾದರೂ ಅದಕ್ಕೆ ಕೇಂದ್ರ ಸರ್ಕಾರವು ಚಿಂತಿಸಲಿದೆ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಅಡಿಕೆ ಬೆಳೆ ಪರವಾಗಿ ಬರವಸೆಯನ್ನು ನೀಡಿದ್ದಾರೆ.
ಶ್ರೀ ಅಖಿಲ ಹವ್ಯಕ ಸಮಾಜದ ಪರವಾಗಿ ಶುಕ್ರವಾರ ಅರಮನೆ ಮೈದಾನದಲ್ಲಿ ಯೋಜಿಸಿದ್ದ ಮೂರು ದಿನಗಳ ತೃತೀಯ ವಿಶ್ವ ಸಮ್ಮೇಳನಕ್ಕೆ ಚಾಲನೆ ನೀಡಿದ ಅವರು, ಅಡಿಕೆಯು ಹವ್ಯಕ ಸಮಾಜ ಮೂಲ ಕೃಷಿಯಾಗಿದೆ ಎಂದು ಹೇಳಿದರು. ಅಡಿಕೆಯು ಮದುವೆಯಿಂದ ಹಿಡಿದು ಶ್ರಾದ್ಯದವರೆಗೂ ಅಗತ್ಯವಾದ ವಸ್ತುವಾಗಿದೆ. ಅಡಿಕೆ ವಿಚಾರದ ಬಗ್ಗೆ ಅನೇಕ ವರದಿಗಳು ಬಂದರೂ ಸಹ, ಇನ್ನು ಮುಂದೆ ಎಷ್ಟೇ ವರದಿಗಳು ಬಂದರೂ ಅಡಿಕೆ ಬೆಳೆಗಾರರು ಭಯಪಡುವ ಅವಶ್ಯಕತೆ ಇಲ್ಲ ಎಂದು ಸಚಿವರು ಹೇಳಿದರು.
ಕೇಂದ್ರ ಸಚಿವರಾದ ಪ್ರಹಲ್ಲಾದ್ ಜೋಶಿ ಅವರು, ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಎದುರಾದರು ಸಹ ಕೇಂದ್ರ ಸರ್ಕಾರವು ಅವರ ಪರವಾಗಿ ಇರುತ್ತದೆ ಎಂದು ಭರವಸೆ ನೀಡಿದರು.
READ MORE Central Government Jobs: ಕೇಂದ್ರ ಸರ್ಕಾರೀ ಉದ್ಯೋಗ, 40 ವರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದು