Gruhalakshmi Scheme| ಗೃಹಲಕ್ಷ್ಮಿ ಯೋಜನೆ ಬದಲಾವಣೆ? ರಾಜ್ಯ ಸರ್ಕಾರದ ಹೊಸ ನಿರ್ಧಾರ!
ಗೃಹಲಕ್ಷ್ಮಿ ಯೋಜನೆಯ (Gruhalakshmi ಸ್ಕೀಮ್) ಹಣ ಪಾವತಿ ವಿಧಾನವನ್ನು ರಾಜ್ಯ ಸರ್ಕಾರವು ಮತ್ತೊಮ್ಮೆ ಪರಿಗಣನೆ ಮಾಡುತ್ತಿದೆ. ಇದುವರೆಗೂ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರ ಮೂಲಕ ಹಣವನ್ನು ಪಾವತಿಸಲಾಗುತ್ತಿತ್ತು.
ಆದರೆ ಈಗ, ತಾಲೂಕು ಪಂಚಾಯಿತಿಯ (Taluk Panchayat) ಹೊಸ ತಂತ್ರಜ್ಞಾನದ ಮೂಲಕ ನೇರವಾಗಿ ಫಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ಈ ಬದಲಾವಣೆಗೆ ಪ್ರಮುಖ ಕಾರಣವೇನೆಂದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲಿನ ಒತ್ತಡ ಕಡಿಮೆ ಮಾಡುವುದು ಮತ್ತು ಹಣ ವಿತರಣೆ ಕ್ರಮವನ್ನು ಸುಗಮಗೊಳಿಸುವುದಾಗಿದೆ. ಈಗಾಗಲೇ ಈ ಯೋಜನೆಯ ಮೂರು ತಿಂಗಳ ಹಣ ಪಾವತಿಯಾಗದೆ ವಿಳಂಬವಾಗಿದ್ದು, ಹಣದ ಕೊರತೆಯು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ರಾಜ್ಯದ ಶಾಸಕರ ಅಭಿಪ್ರಾಯದ ಪ್ರಕಾರ, ಸರ್ಕಾರದ ಯೋಜನೆಗಳಿಗೆ ಹಣದ ಕೊರತೆ ಎದುರಾಗಿದ್ದು. ಗೃಹಲಕ್ಷ್ಮಿ ಯೋಜನೆಯ ಪಾವತಿಗೂ ಈ ಸಮಸ್ಯೆ ಎದುರಾಗಿದ್ದು ಮತ್ತು ಹಲವಾರು ಮಹಿಳೆಯರು ಈ ಯೋಜನೆಯಿಂದ ಹಣ ಬಾರದೆ ತೊಂದರೆಗೆ ಒಳಗಾಗಿದ್ದಾರೆ. ಈ ನಡುವೆ ತಾಲೂಕು ಪಂಚಾಯಿತಿಯಿಂದ ಹಣ ವಿತರಣೆ ಮಾಡುವುದರಿಂದ ಅಕ್ರಮ ನಡೆಯಬಹುದೆಂಬ ಆತಂಕವು ಎಲ್ಲರಲ್ಲಿ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವಾಗಿ ರೈತರ ಖಾದಿಗೆ ಜಮಾ ಯಾಗುತ್ತಿರುವಾಗ, ಜಯಲಕ್ಷ್ಮಿ ಯೋಜನೆ ಹಣ ಪಾವತಿಯು ವಿಳಂಬವಾಗುತ್ತಿರುವುದು ಪ್ರಶ್ನೆಗೆ ಕಾರಣವಾಗಿದೆ. ಈ ಅಧಿಕೃತ ಹೊಸ ಆದೇಶಗಳು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆರೋಗ್ಯ ಸುಧಾರಣೆಯಾದ ಬಳಿಕ ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.